ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಕಾಣಿಯೂರು ಗ್ರಾಮ ಸಮಿತಿಯ ವತಿಯಿಂದ ಶ್ರೀ ರಾಮ ನಾಮ ತಾರಕ ಮಂತ್ರದ ದೀಕ್ಷೆ
ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶದ ಅಂಗವಾಗಿ ಶ್ರೀರಾಮ ಹನುಮಜ್ಯೋತಿ ರಥಯಾತ್ರೆ, ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ಇದರ ಕಾಣಿಯೂರು ಗ್ರಾಮ ಸಮಿತಿಯ ವ್ಯಾಪ್ತಿಗೆ ಒಳಪಡುವ ಕಾಣಿಯೂರು , ಚಾರ್ವಾಕ,ದೋಳ್ಪಾಡಿ, ಬೆಳಂದೂರು, ಕಾಯ್ಮಣ ಗ್ರಾಮಗಳಿಗೆ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಶ್ರೀ ರಾಮ ನಾಮ ತಾರಕ ಮಂತ್ರದ ದೀಕ್ಷೆಯನ್ನು ನೀಡಲಾಯಿತು.ಕಾಣಿಯೂರು ಗ್ರಾಮ ಸಮಿತಿಯ ಜಪ ಯಜ್ಞ ಸಂಚಾಲಕರಾದ ಚಿದಾನಂದ ಉಪಾಧ್ಯಾಯ ಕಲ್ಪಡ ದೀಕ್ಷೆಯನ್ನು ನೀಡಿದರು.ಇದೇ ವೇಳೆ ರಾಮನಿಗೊಂದು ಹನುಮನಿಗೊಂದು ಸಮರ್ಪಿಸುವ ನಾರಿಕೇಳ ಸಂಗ್ರಹದ ಬಗ್ಗೆಯು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಉದಯ ರೈ ಮಾದೋಡಿ, ಪುರುಷೋತ್ತಮ ಕಂಪ, ಪದ್ಮಯ್ಯ ಗೌಡ ಅನಿಲ, ದೇವಕಿ ಕಟ್ಟತ್ತಾರು, ಪಾರ್ವತಿ ಕಾಣಿಯೂರು, ಚಂಪಾ ಅಬೀರ, ಪ್ರಮೀಳಾ ಅಜಿರಂಗಳ, ಜಗದೀಶ್ ಅಗಳಿ, ದೀಪಕ್ ನಾರ್ಯ, ಧನಂಜಯ ಕೇನಾಜೆ,ಲಕ್ಷ್ಮಣ ಗೌಡ ಮುಗರಂಜ, ಬಾಲಕೃಷ್ಣ ಇಡ್ಯಡ್ಕ, ಬಾಲಕೃಷ್ಣ ಬಸ್ತಿ ಬೆದ್ರಾಜೆ, ಪುಟ್ಟಣ್ಣ ಮುಗರಂಜ, ಪ್ರಶಾಂತ್ ಭಟ್ ಕಟ್ಟತ್ತಾರು, ಸುರೇಶ್ ಓಡಬಾಯಿ, ಕೇಶವ ಕಟ್ಟತ್ತಾರು, ಉಮೇಶ್ ಅಗಳಿ, ಮಿಥುನ್ ಕೊಯಕ್ಕುಡೆ ಮೊದಲಾದವರು ಉಪಸ್ಥಿತರಿದ್ದರು.ಗ್ರಾಮ ಸಮಿತಿಯ ಕಾರ್ಯದರ್ಶಿ ಜಯಂತ ಅಬೀರ ಸ್ವಾಗತಿಸಿ, ವಂದಿಸಿದರು.