Home ಧಾರ್ಮಿಕದೇಲಂಪಾಡಿ: ಹಿಂದೂ ಹೃದಯ ಸಂಗಮಕ್ಕೆ ಚಾಲನೆ – ಫೆಬ್ರವರಿ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳ ಸಂಭ್ರಮ

ದೇಲಂಪಾಡಿ: ಹಿಂದೂ ಹೃದಯ ಸಂಗಮಕ್ಕೆ ಚಾಲನೆ – ಫೆಬ್ರವರಿ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳ ಸಂಭ್ರಮ

by Editor
ದೇಲಂಪಾಡಿ: ಸನಾತನ ಧರ್ಮದ ಪರಂಪರೆ ಮತ್ತು ಏಕತೆಯ ಭಾವನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ದೇಲಂಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ‘ಹಿಂದೂ ಹೃದಯ ಸಂಗಮ’ ಸಮಾಜೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಉತ್ಸವವು ಯುವ ಪೀಳಿಗೆಗೆ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಗುರಿ ಹೊಂದಿದೆ.

ಸಮಾಜೋತ್ಸವದ ಅಂಗವಾಗಿ ಫೆಬ್ರವರಿ 1 ರಿಂದ 27 ರವರೆಗೆ ಭರ್ಜರಿ ಗೃಹ ಸಂಪರ್ಕ ಅಭಿಯಾನ ನಡೆಯಲಿದೆ. ಫೆಬ್ರವರಿ 8 ರಂದು ಪಂಚಾಯತ್ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ‘ಪ್ರಾರ್ಥನಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 22 ರಂದು ಅಡೂರು ವಿದ್ಯಾಭಾರತಿ ವಿದ್ಯಾಲಯದಲ್ಲಿ ಚಿತ್ರಕಲೆ ಹಾಗೂ ವಂದೇ ಮಾತರಂ ಗೀತೆ ಗಾಯನ ಸ್ಪರ್ಧೆಗಳು ಜರುಗಲಿವೆ.
ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಫೆಬ್ರವರಿ 28 ರಂದು ಮಧ್ಯಾಹ್ನ 3 ಗಂಟೆಯಿಂದ ಅಡೂರು ಕ್ಷೇತ್ರದ ಪರಿಸರದಲ್ಲಿ ‘ನಾಟ್ಯ ವೈಭವ’ ಮತ್ತು ‘ಶ್ರೀ ಕೃಷ್ಣ ಲೀಲೋತ್ಸವ’ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ. ಸಂಜೆ 4:30ಕ್ಕೆ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ಜಾತಿ ಭೇದ ಮರೆತು ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ .

You may also like

Leave a Comment