397
ಕಾಣಿಯೂರು ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಗೊನೆ ಮುಹೂರ್ತ

ಶ್ರೀ ಜಗದ್ಗುರು ಶ್ರೀ ಮನ್ ಮನ್ಮಾಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ ಶ್ರೀ ಕಾಣಿಯೂರು ಮಠ ಇಲ್ಲಿ ದಿನಾಂಕ 17-03-2026ರಂದು ನಡೆಯಲಿರುವ ಶ್ರೀ ಲಕ್ಷ್ಮೀ ನೃಸಿಂಹ ದೇವರ ಮತ್ತು ಮುಖ್ಯ ಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆಯಿತು.ಅರ್ಚಕರಾದ ಪ್ರಕಾಶ್ ಉಪಾಧ್ಯಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಅಚಾರ್, ಪದ್ಮಯ್ಯ ಗೌಡ ಅನಿಲ, ಮಾಧವ ಕಟ್ಟತ್ತಾರು, ಜನಾರ್ಧನ ಪೆರ್ಲೋಡಿ, ಪರಮೇಶ್ವರ ಅನಿಲ, ಪುಟ್ಟಣ್ಣ ಗೌಡ ಮುಗರಂಜ, ರವೀಂದ್ರ ಅನಿಲ, ತಾರಾನಾಥ ಕಟ್ಟತ್ತಾರು, ಹರೀಶ್ ಮುಗರಂಜ, ಕರಿಯಪ್ಪ ಮಠತ್ತಾರು, ಜಯಂತ ಅಬೀರ ಮೊದಲಾದವರು ಉಪಸ್ಥಿತರಿದ್ದರು.