Home ರಾಜ್ಯಬೆಂಗಳೂರುಗ್ಯಾಸ್‌ಗಾಗಿ ಪರದಾಡುತ್ತಿರುವವರಿಗೆ ಇಂದು ಸಿಹಿಸುದ್ದಿ? ಅನಿಲ ಸಿಲಿಂಡರ್ ಕೊರತೆ ಹಿನ್ನೆಲೆ: ಗ್ಯಾಸ್ ಕಂಪನಿಗಳ ಜೊತೆ ಇಂದು ಸಭೆ – ಸಚಿವ ಕೆ.ಎಚ್. ಮುನಿಯಪ್ಪ

ಗ್ಯಾಸ್‌ಗಾಗಿ ಪರದಾಡುತ್ತಿರುವವರಿಗೆ ಇಂದು ಸಿಹಿಸುದ್ದಿ? ಅನಿಲ ಸಿಲಿಂಡರ್ ಕೊರತೆ ಹಿನ್ನೆಲೆ: ಗ್ಯಾಸ್ ಕಂಪನಿಗಳ ಜೊತೆ ಇಂದು ಸಭೆ – ಸಚಿವ ಕೆ.ಎಚ್. ಮುನಿಯಪ್ಪ

Good News Today for Those Struggling for Gas? Gas Cylinder Shortage: Meeting with Gas Companies Today – Minister K. H. Muniyappa

by anamika

ಗ್ಯಾಸ್‌ಗಾಗಿ ಪರದಾಡುತ್ತಿರುವವರಿಗೆ ಇಂದು ಸಿಹಿಸುದ್ದಿ?

ಅನಿಲ ಸಿಲಿಂಡರ್ ಕೊರತೆ ಹಿನ್ನೆಲೆ: ಗ್ಯಾಸ್ ಕಂಪನಿಗಳ ಜೊತೆ ಇಂದು ಸಭೆ – ಸಚಿವ ಕೆ.ಎಚ್. ಮುನಿಯಪ್ಪ

Bengaluru: ರಾಜ್ಯದಲ್ಲಿ ಉಂಟಾಗಿರುವ ಅನಿಲ ಸಿಲಿಂಡರ್ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೋಮವಾರ ಅನಿಲ ಕಂಪನಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ K. H. Muniyappa ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ 4 ಗಂಟೆಗೆ ಮುಖ್ಯ ಕಾರ್ಯದರ್ಶಿ Shalini Rajneesh ಅವರ ನೇತೃತ್ವದಲ್ಲಿ ಗ್ಯಾಸ್ ಕಂಪನಿಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ ಎಂದರು. ಈ ಸಭೆಯಲ್ಲಿ ಹೋಟೆಲ್‌ಗಳಿಗೆ ಅಗತ್ಯವಿರುವಷ್ಟು ಅನಿಲ ಸಿಲಿಂಡರ್ ಪೂರೈಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಇದೇ ವೇಳೆ ಅನಿಲ ತುಂಬಿದ ಎರಡು ಹಡಗುಗಳು ದೇಶಕ್ಕೆ ಆಗಮಿಸಿರುವುದರಿಂದ ಸರಬರಾಜು ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಆದರೆ ಅಂತರಾಷ್ಟ್ರೀಯ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸ್ಥಿರವಾಗಿಲ್ಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಿತವ್ಯಯವಾಗಿ ಗ್ಯಾಸ್ ಬಳಸುವಂತೆ ಸಚಿವರು ಮನವಿ ಮಾಡಿದರು.

You may also like

Leave a Comment