Home Uncategorizedಮಂತ್ರಾಲಯದಲ್ಲಿ ಜಲ ದುರಂತ: ತುಂಗಭದ್ರೆಯಲ್ಲಿ ಐವರು ನೀರುಪಾಲು, ಓರ್ವ ಯುವತಿ ಪಾರು

ಮಂತ್ರಾಲಯದಲ್ಲಿ ಜಲ ದುರಂತ: ತುಂಗಭದ್ರೆಯಲ್ಲಿ ಐವರು ನೀರುಪಾಲು, ಓರ್ವ ಯುವತಿ ಪಾರು

by anamika

ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಜಲ ದುರಂತ: ಐವರು ನೀರುಪಾಲು, ಓರ್ವ ಯುವತಿ ಪಾರು

ಮಂತ್ರಾಲಯ: ಆಂಧ್ರ ಪ್ರದೇಶದ ಮಂತ್ರಾಲಯ ಸಮೀಪದ ತುಂಗಭದ್ರಾ ನದಿಯಲ್ಲಿ ಸಂಭವಿಸಿದ ದುರಂತದಲ್ಲಿ ಹೈದರಾಬಾದ್ ಹಾಗೂ ಸ್ಥಳೀಯ ಮೂಲದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸಂಬಂಧಿಕರ ಮನೆಯಲ್ಲಿ ನಡೆದ ಪೂಜೆ ಕಾರ್ಯಕ್ರಮದಲ್ಲಿಭಾಗವಹಿಸಿದ್ದವರು ಬಳಿಕ ನದಿಯಲ್ಲಿ ಈಜಲು ಇಳಿದ ವೇಳೆ ನೀರಿನ ಆಳ ಅರಿಯದೆ ಅಪಾಯಕ್ಕೀಡಾಗಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈವರೆಗೆ ರಾಘವೇಂದ್ರ ಹಾಗೂ ಸಂಧ್ಯಾ ಅವರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

You may also like

Leave a Comment