34
ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಅಂಬೇಡ್ಕರ್ ಜನ್ಮ ದಿನಾಚರಣೆ
ಬಿಜೆಪಿ ಸುಳ್ಯ ಮಂಡಲ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರದ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಯುವ ಸಭಾಭವನ ಸವಣೂರು ಇಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ರವರ 135ನೇ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಸದಸ್ಯರಾದ ತಾರನಾಥ ಕಾಯರ್ಗ, ಶಕ್ತಿಕೇಂದ್ರ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು, ಗ್ರಾಪಂ ಮಾಜಿ ಸದಸ್ಯರಾದ ಗಿರಿಶಂಕರ ಸುಲಾಯ, ಮಂಡಲ ಓಬಿಸಿ ಮೋರ್ಚ ಸದಸ್ಯೆ ಚಂದ್ರಾವತಿ ಸುಣ್ಣಾಜೆ,ಬೂತ್ 66ರ ಅಧ್ಯಕ್ಷರಾದ ರಾಜೇಶ್ ಇಡ್ಯಾಡಿ, ಹಿರಿಯರಾದ ರಾಮ್ ಭಟ್ ಕುಕ್ಕುಜೆ, ಸುರೇಶ್ ರೈ ಸೂಡಿ ಮುಳ್ಳು, ದಯಾನಂದ ಮೆದು, ಶ್ರೀಧರ ಸುಣ್ಣಾಜೆ,ಕುಲ ಪ್ರಕಾಶ್ ಮೆದು, ಉಪಸ್ಥಿತರಿದ್ದರು.