Home Uncategorizedಮಯ್ಯಾಳ  ಸಾಲೆಯತ್ತಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಒತ್ತೆಕೋಲ ಮಹೋತ್ಸವ

ಮಯ್ಯಾಳ  ಸಾಲೆಯತ್ತಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಒತ್ತೆಕೋಲ ಮಹೋತ್ಸವ

by anamika

 

ಮಯ್ಯಾಳ  ಸಾಲೆಯತ್ತಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಒತ್ತೆಕೋಲ ಮಹೋತ್ಸವ

ಈಶ್ವರಮಂಗಲ, ಏಪ್ರಿಲ್ 15: ಇತಿಹಾಸ ಪ್ರಸಿದ್ಧ ಮಯ್ಯಾಲ ಶಾಲೆಯತ್ತಡ್ಕ ವಿಷ್ಣುನಗರದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 46ನೇ ವರ್ಷದ ಭವ್ಯ ‘ಒತ್ತೆಕೋಲ’ ಮಹೋತ್ಸವವು ಏಪ್ರಿಲ್ 16 ಮತ್ತು 17ರಂದು ಶ್ರದ್ಧಾಭಕ್ತಿಗಳೊಂದಿಗೆ ನಡೆಯಲಿದೆ.

ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ವೈಭವವನ್ನು ಪ್ರತಿಬಿಂಬಿಸುವ ಈ ಮಹೋತ್ಸವವು ಎರಡು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು, ಭಕ್ತಿಪರ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಜರುಗಲಿದ್ದು, ಸಮಿತಿಯಿಂದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಕಾರ್ಯಕ್ರಮದ ವೇಳಾಪಟ್ಟಿ

ಏಪ್ರಿಲ್ 16, ಗುರುವಾರ:

ಸಂಜೆ 7:00ಕ್ಕೆ ಭಜನಾ ಕಾರ್ಯಕ್ರಮ

ಸಂಜೆ 7:30ಕ್ಕೆ ಭಂಡಾರ ಆಗಮನ

ರಾತ್ರಿ 8:30ಕ್ಕೆ ಮಲೇರಿಗೆ ಅಗ್ನಿ ಸ್ಪರ್ಶ (ಒತ್ತೆಕೋಲದ ಪ್ರಮುಖ ವಿಧಿ)

ರಾತ್ರಿ 9:00ರಿಂದ ಅನ್ನಸಂತರ್ಪಣೆ

ರಾತ್ರಿ 9:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು

ರಾತ್ರಿ 11:00ಕ್ಕೆ ಶ್ರೀ ದೈವದ ಕುಳಿಚಾಟು

ರಾತ್ರಿ 12:30ರಿಂದ ಯಕ್ಷಗಾನ ಬಯಲಾಟ

ಕುಳಿಚಾಟು ಬಳಿಕ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ “ಶ್ರೀ ಕೃಷ್ಣ ಪಾರಿಜಾತ ಮತ್ತು ನರಕಾಸುರ ಮೋಕ್ಷ” ಪ್ರಸಂಗವನ್ನು ಈಶ್ವರಮಂಗಲದ ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ, ಬೆಳ್ಳಿಚಡವು ತಂಡವು ನಿರ್ವಹಿಸಲಿದೆ.

ಏಪ್ರಿಲ್ 17, ಶುಕ್ರವಾರ: ಮರುದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಈ ಭಕ್ತಿಪೂರ್ವಕ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೈವದ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

You may also like

Leave a Comment