Home HISTORYಚಾರ್ವಾಕ ಕೊರಿಯಾನ ಬ್ರಹ್ಮ ಬೈದೆರ್ಕಳ ಗರಡಿಗೆ ₹25 ಸಾವಿರ ಧನಸಹಾಯ ಹಸ್ತಾಂತರ

ಚಾರ್ವಾಕ ಕೊರಿಯಾನ ಬ್ರಹ್ಮ ಬೈದೆರ್ಕಳ ಗರಡಿಗೆ ₹25 ಸಾವಿರ ಧನಸಹಾಯ ಹಸ್ತಾಂತರ

by anamika

ಕಡಬ ತಾಲೂಕು ಚಾರ್ವಾಕ ಕೊರಿಯಾನ ಶ್ರೀ ಬ್ರಹ್ಮ ಬೈದೆರ್ಕಳ ಗರಡಿ ಪರಿವಾರ ದೈವಗಳ ಪ್ರತಿಷ್ಟಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ಈ ಕಾರ್ಯಕ್ರಮಕ್ಕೆ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೂ. 25000-00 ಮೊತ್ತದ ಧನ ಸಹಾಯದ ಚೆಕ್ ನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಕೊರಿಯಾನ ಶ್ರೀ ಬ್ರಹ್ಮ ಬೈದೆರ್ಕಳ ಗರಡಿಯ ಜೀರ್ಣೋದ್ದಾರ ಸಮಿತಿ ಸಂಚಾಲಕರು ಆದ ಗಣೇಶ್ ಉದನಡ್ಕ ರವರು ಬ್ರಹ್ಮ ಬೈದೆರ್ಕಳ ಗರಡಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ ರವರಿಗೆ ಹಸ್ತಾಂತರಿಸಿದರು..

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ವಿಜಯ ಕುಮಾರ್ ಸೊರಕೆ,ಆಡಳಿತ ಸಮಿತಿ ಉಪಾಧ್ಯಕ್ಷರಾದ ವಸಂತ ದಲಾರಿ, ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಇಡ್ಯಡ್ಕ, ನಿರ್ದೇಶಕರಾದ ವಿಶ್ವನಾಥ ಕೂಡಿಗೆ, ಸುಂದರ ದೇವಸ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಗೌಡ, ಪುತ್ತೂರು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಚಂದ್ರಾವತಿ ಅಭಿಕಾರ, ಸ್ವಯಂಸೇವಕ ಸಮಿತಿ ಅಧ್ಯಕ್ಷರಾದ ನಂದನ್ ಕಜೆ, ಆಡಳಿತ ಸಮಿತಿಯ ಅಜಿತ್ ಕುಮಾರ್ ನಡುಬೈಲು,ನಯನ್ ಕುಮಾರ್ ಸಹಿತ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

You may also like

Leave a Comment