Home ರಾಜ್ಯಪಿಲಿಕುಳ ಮೃಗಾಲಯದಲ್ಲಿ ಕೃಷ್ಣಮೃಗ ಸಾವು: ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಪಿಲಿಕುಳ ಮೃಗಾಲಯದಲ್ಲಿ ಕೃಷ್ಣಮೃಗ ಸಾವು: ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

by Editor

​ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿಬೆನ್ನೂರು ಅಭಯಾರಣ್ಯದಿಂದ ತರಲಾಗಿದ್ದ ಕೃಷ್ಣಮೃಗವೊಂದು ಮಂಗಳವಾರ ರಾತ್ರಿ ನಿಗೂಢವಾಗಿ ಮೃತಪಟ್ಟಿದೆ. ಆರೋಗ್ಯವಾಗಿದ್ದ ಪ್ರಾಣಿ ಏಕಾಏಕಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ನಿಯಮದಂತೆ ಯಾವುದೇ ಪ್ರಾಣಿ ಮೃತಪಟ್ಟ 24 ಗಂಟೆಗಳ ಒಳಗೆ ಮರಣೋತ್ತರ ಪರೀಕ್ಷೆ ನಡೆಸಬೇಕು ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ಮಾಹಿತಿ ನೀಡಬೇಕು. ಆದರೆ, ಬುಧವಾರ ರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸದೆ ಮೃತದೇಹವನ್ನು ಶೀತಲೀಕರಣ ಘಟಕದಲ್ಲಿ ಇಡಲಾಗಿತ್ತು. ಜಿಲ್ಲಾಡಳಿತಕ್ಕೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

You may also like

Leave a Comment