88
ಕರ್ತವ್ಯದ ಮಧ್ಯೆ ಬಿದ್ದು ಸಿಕ್ಕಿದ ಹಣವನ್ನು ಬದಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿ ಆದರ್ಶ ಮೆರೆದ ಹರಿತ ಕರ್ಮ ಸೇನಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯತು ಅಧ್ಯಕ್ಷರ ನೇತೃತ್ವದಲ್ಲಿ ಗೌರವಿಸಲಾಯಿತು.
ಬದಿಯಡ್ಕ ಗ್ರಾಮ ಪಂಚಾಯತು 5 ನೇ ವಾರ್ಡು ಮೂಕಂಪಾರೆಯ ಹರಿತ ಕರ್ಮ ಸೇನೆಯ ಕಾರ್ಯಕರ್ತೆಯರಾದ ಸತ್ಯಪ್ರೇಮ, ರೇಖ ಎಂಬಿವರಿಗೆ ಮೂಕಂಪಾರೆ ಶ್ರೀರಾಮ ಮಂದಿರ ಬಳಿಯಿಂದ ಹಣ ಬಿದ್ದು ಸಿಕ್ಕಿತ್ತು. ಈ ಹಣವನ್ನು ಅವರು ಕೂಡಲೇ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿ ಆದರ್ಶ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀ ಡಿ ಶಂಕರ ಅವರು ಶಾಲು ಹೊದಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅವಿನಾಶ್ ರೈ ಬದಿಯಡ್ಕ, ರಜನಿ ಸಂದೀಪ್ , ಹಮೀದ್ ಕೆಡೆಂಜಿ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಉಷ ಪಳ್ಳತ್ತಡ್ಕ, ಶಾಮ ಪ್ರಸಾದ ಸರಲಿ ಮೊದಲಾದವರು ಉಪಸ್ಥಿತರಿದ್ದರು.