101
ಹನುಮಗಿರಿ ಬ್ರಹ್ಮಕಲಶ: ಪುಣ್ಣಪ್ಪಾಡಿ ಗ್ರಾಮದಲ್ಲಿ ರಾಮ ತಾರಕ ಮಂತ್ರದ ಜಪ ದೀಕ್ಷೆ

ಹನುಮಗಿರಿ ಬ್ರಹ್ಮ ಕಲಶೋಶ್ಸವದ ಅಂಗವಾಗಿ ಶ್ರೀ ರಾಮ ತಾರಕ ಜಪ ದೀಕ್ಷೆ ಯನ್ನು ಪುಣ್ಣಪ್ಪಾಡಿ ಗ್ರಾಮದ ಗೌರಿ ಸಧನ ನೇರೋಳ್ತಡ್ಕದಲ್ಲಿ ನೀಡಲಾಯಿತು .ಈ ಸಂದರ್ಭದಲ್ಲಿ 37 ಜನರು ದೀಕ್ಷೆ ಯನ್ನು ಪಡೆದರು. ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್ ಕೆ ಸವಣೂರು, ಜಪಯಜೃ ಗ್ರಾಮ ಸಮಿತಿ ಸಂಚಾಲಕರು ಗಿರಿಶಂಕರ ಸುಲಾಯ,ಲಿಂಗಪ್ಪ ರೈ ಚೆಂಬುತ್ತೋಡಿ ,ರಥ ಸಮಿತಿ ಸಂಚಾಲಕರು ಚೇತನ್ ಕುಮಾರ್ ಕೋಡಿಬೈಲು ಸಾಮಾಜಿಕ ಜಾಲತಾಣ ಸಮಿತಿ ಸಂಚಾಲಕರು ಸತೀಶ್ ಬಲ್ಯಾಯ ನಾರೀಕೇಳ ಸಮಿತಿಯ ಪುಟ್ಟಣ್ಣ ಗೌಡ ಬದಿಯಡ್ಕ, ಮಹಿಳಾ ಸಮಿತಿಯ ಆಶಾ ರೈ ಕಲಾಯಿ ಭಜನಾ ಸಮಿತಿಯ ಜಯಶ್ರೀ ಕುಚ್ಚೆಜಾಲು, ಶೇಷಮ್ಮ, ಪ್ರಕಾಶ್ ರೈ ಸಾರಕರೆ ಪ್ರಶಾಂತ್ ಗುಂಡ್ಯಡ್ಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.