🌾 ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ: ಇನ್ನು ಅಕ್ಕಿ ಜೊತೆಗೆ 2 ಕೆಜಿ ರಾಗಿ ಉಚಿತ!
📍ಬೆಂಗಳೂರು: ರಾಜ್ಯದ ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಸೌಲಭ್ಯ ಘೋಷಿಸಿದೆ. ಅನ್ನಭಾಗ್ಯ ಯೋಜನೆಯಡಿ ಮೇ 2026ರಿಂದ ಉಚಿತ ಅಕ್ಕಿಯೊಂದಿಗೆ 2 ಕೆಜಿ ರಾಗಿಯನ್ನೂ ವಿತರಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತೀರ್ಮಾನಿಸಿದೆ.
ಈವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 10 ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಇನ್ನು ಮುಂದೆ ಪೌಷ್ಟಿಕ ಆಹಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಗಿಯನ್ನೂ ಸೇರಿಸಲಾಗುತ್ತಿದೆ.
🌾 4 ಕೋಟಿಗೂ ಹೆಚ್ಚು ಜನರಿಗೆ ಲಾಭ
ರಾಜ್ಯದಲ್ಲಿ 1.14 ಕೋಟಿಗೂ ಅಧಿಕ ಬಿಪಿಎಲ್ ಕಾರ್ಡ್ಗಳಿದ್ದು, ಸುಮಾರು 4.01 ಕೋಟಿ ಸದಸ್ಯರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ತಿಂಗಳು ಸುಮಾರು 57 ಸಾವಿರ ಮೆಟ್ರಿಕ್ ಟನ್ ರಾಗಿ ಅಗತ್ಯವಿದ್ದು, ಈಗಾಗಲೇ 10 ತಿಂಗಳಿಗಾಗುವಷ್ಟು ರಾಗಿ ಸಂಗ್ರಹಿಸಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು ಬೆಂಬಲ ಬೆಲೆಯಡಿ ರೈತರಿಂದ 5.2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿ ದಾಸ್ತಾನು ಮಾಡಿದೆ.
🌽 ಪ್ರದೇಶಾನುಸಾರ ರಾಗಿ-ಜೋಳ ವಿತರಣೆ
ಹಳೇ ಮೈಸೂರು ಭಾಗದ ಪಡಿತರದಾರರಿಗೆ 2 ಕೆಜಿ ರಾಗಿ ನೀಡಲಾಗುತ್ತಿದ್ದು, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಫಲಾನುಭವಿಗಳಿಗೆ 2 ಕೆಜಿ ಜೋಳ ವಿತರಿಸಲು ಸರ್ಕಾರ ಯೋಜಿಸಿದೆ.
📦 ಮೇ-ಜೂನ್ ಪಡಿತರ ಒಂದೇ ತಿಂಗಳಲ್ಲಿ ವಿತರಣೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮೇ ಮತ್ತು ಜೂನ್ 2026ರ ಆಹಾರಧಾನ್ಯಗಳನ್ನು ಮೇ ತಿಂಗಳಲ್ಲಿಯೇ ವಿತರಿಸಲು ಸರ್ಕಾರ ಸೂಚಿಸಿದೆ.
🔹 ಅಂತ್ಯೋದಯ (AAY) ಕಾರ್ಡ್ಗಳಿಗೆ:
➡️ 42 ಕೆಜಿ ರಾಗಿ + 28 ಕೆಜಿ ಅಕ್ಕಿ = ಒಟ್ಟು 70 ಕೆಜಿ
🔹 PHH ಕಾರ್ಡ್ ಸದಸ್ಯರಿಗೆ:
➡️ ಪ್ರತಿ ಸದಸ್ಯರಿಗೆ 6 ಕೆಜಿ ರಾಗಿ + 4 ಕೆಜಿ ಅಕ್ಕಿ = ಒಟ್ಟು 10 ಕೆಜಿ
🖐️ ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ
ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸರ್ವರ್ ಸೌಲಭ್ಯ ಲಭ್ಯವಿದ್ದು, ಪಡಿತರ ಪಡೆಯುವ ವೇಳೆ ಫಲಾನುಭವಿಗಳು ಎರಡು ಬಾರಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ.
🚜 ರೈತರಿಗೆ ಮತ್ತೊಂದು ಅವಕಾಶ
ರಾಗಿ ಮಾರಾಟ ಮಾಡಲು ನೋಂದಾಯಿತ ರೈತರಿಗೆ ಮೇ 15ರವರೆಗೆ ಅವಕಾಶ ನೀಡಲಾಗಿದ್ದು, 6 ಲಕ್ಷ ಮೆಟ್ರಿಕ್ ಟನ್ಗಿಂತ ಹೆಚ್ಚು ರಾಗಿ ಸಂಗ್ರಹಿಸುವ ಗುರಿ ಸರ್ಕಾರ ಹೊಂದಿದೆ.