89
ಸುಳ್ಯ: ಜನವರಿ 25 ರಂದು ಜಾಲ್ಲೂರು ನಲ್ಲಿ ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮ ಪೂರ್ವಭಾವಿಯಾಗಿ ನಾಳೆ (ಜ. 23) ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಕನಕಮಜಲು ಆತ್ಮರಾಮ ಭಜನಾ ಮಂದಿರದಿಂದ ಸಂಜೆ 4 ಗಂಟೆಗೆ ರ್ಯಾಲಿ ಪ್ರಾರಂಭ ಗೊಂಡು ಜಾಲ್ಸೂರು-ಮೂರೂರು-ಮಂಡೆಕೋಲು ಮಾರ್ಗವಾಗಿ ಅಡ್ಕಾರು ಅಲ್ಲಿಂದ ಪೈಚಾರು-ಸೋಣಂಗೇರಿ ಯಾಗಿ ಜಾಲ್ಲೂರು ಮೂಲಕ ಹಿಂದೂ ಸಂಗಮ ಮೈದಾನ ಬಳಿ ಸಮಾಪನಗೊಳ್ಳಲಿದೆಯೆಂದು ಸಂಘಟಕರು ತಿಳಿಸಿದ್ದಾರೆ.ದ್ವಿಚಕ್ರ ಸವಾರರು ಹೆಲ್ಮಟ್ ಧರಿಸಿ ಸಂಚಾರ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ