66
ಬೆಳ್ಳಾರೆಯಲ್ಲಿ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣ ದಿನಾಚರಣೆ
ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಮಾರ್ಚ್ 31 2026 ನೇ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ನಡೆಯಲಿದೆ.

1837 ಅಮರ ದಂಗೆಯ ಮೂಲಕ ಕೆಳಕೊಡಗಿನಿಂದ ರಾಮಯ್ಯ ಗೌಡರ ನೇತೃತ್ವದಲ್ಲಿ ಹೊರಟ ಸೈನ್ಯ ಮಂಗಳೂರು ವರೆಗಿನ ಬ್ರಿಟೀಷರನ್ನು ಹೊಡೆದೋಡಿಸಿ ಮಂಗಳೂರಿನಲ್ಲಿ ವಿಜಯವನ್ನು ಸಾದಿಸಿ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಿದ್ದರು.

ಈ ಎಲ್ಲದರ ನೆನಪಿಗಾಗಿ ಬೆಳ್ಳಾರೆಯಲ್ಲಿ ಸಮರ ವೀರ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಬ್ರಿಟೀಷರು ನೆಲೆಯಾಗಿದ್ದ ಬೆಳ್ಳಾರೆಯ ಕೋಟೆ ಮತ್ತು ಅವರನ್ನೆಲ್ಲಾ ಹೊಡೆದೋಡಿಸಿ ವಿಜಯದ ಸಂಕೇತವಾಗಿ ಮೊದಲು ಅಮರ ಸೈನ್ಯದ ಕೈ ವಶವಾದ ಬಂಗ್ಲೆಗುಡ್ಡೆಯಲ್ಲಿ ನಡೆಯಲಿದೆ.
